Sunday, April 19, 2009

ಸ್ವಿಸ್ ಬ್ಯಾಂಕ್ ನದೇ ಸುದ್ದಿ.
ಭಾರತದ ಅಪಾರ ಹಣ ಸ್ವಿಸ್ ಬ್ಯಾಂಕ್ ನಲ್ಲಿದೆ ಎಂದು ದೇಶವಿಡಿ ಪ್ರಚಾರವಾಗುತ್ತಿದೆ. ೨೫ ಲಕ್ಷ ಕೋಟಿ ಹಣ ಇದೆಯೆಂದು ನಾವೆಲ್ಲ ಓದುತ್ತಾ ಇದ್ದೇವೆ. ಆದರೆ ಈ ವರೆಗೆ ಬಂದಿರುವ ಸರಕಾರಗಳು ಯಾಕೆ ಹಾಗೆ ಸುಮ್ಮನೆ ಕುಳಿತ್ತಿದ್ದವು?. ಈಗ ಒಮ್ಮೆಲೇ ಆಕುರಿತು ನೆನೆಪಾದದ್ದು ಹೇಗೆ? ಮತ್ತು ಯಾವ ಪಕ್ಷಗಳು ಅಧಿಕಾರಕ್ಕೆ ಬರುತ್ತವೆಯೋ ಆವರು ಮಾತ್ರ ಹಣ ತರಬಲ್ಲರೆ? ಇತರರಿಗೆ ಸಾಧ್ಯವಿಲ್ಲವೇ? ಅದಕ್ಕಾಗಿ ಇತರ ಭಾರತೀಯರು ಏನು ಮಾಡಬಹುದು? ಎಲ್ಲಾ ರಾಜಕೀಯ ಪಕ್ಷಗಳಿಗೆ ತಲೆಯಲ್ಲಿರುವ ಒಂದೆ ಯೋಚನೆ ಈ ದೇಶವನ್ನು ಆಳುವ ಅಧಿಕಾರವನ್ನು ಅವರಿಗೆ ಯಾರೋ ಗುತ್ತಿಗೆ ಕೊಟ್ಟಿದ್ದಾರೆ ಎಂದು. ಆದರೆ ಭಾರತದ ಅಧಿಕಾರ ಸಿಂಹಾಸನ ಬಹಳ ಪವಿತ್ರವಾದದ್ದು.ಅದನ್ನು ಏರಲು ಸಾಧಾರಣ ವ್ಯಕ್ತಿಗೆ ಸಾಧ್ಯವಿಲ್ಲ ಎಂಬುದನ್ನೂ ನಮ್ಮ ನಾಯಕರು ಅರ್ಥ ಮಾಡಿಕೊಳ್ಳ ಬೇಕಾಗುತ್ತದೆ. ಅಧಿಕ್ಕರಕಾಗಿ ಹಂಬಲಿಸುವವರು ಮತ್ತು ಅ ನಿಟ್ಟಿನಲ್ಲಿ ನಮ್ಮನ್ನು ನಿರಂತರವಾಗಿ ಬೌಧ್ಧಿಕವಾಗಿ ಮೋಸಮಾಡುವವರನ್ನು ನಾವು ತಿರಸ್ಕರಿಸಬೇಕಾಗುತ್ತದೆ. ನಾವು ಎಷ್ಟು ಬೊಬ್ಬಿಟ್ಟರು ರಾಜಕೀಯ ವ್ಯಕ್ತಿಗಳಿಗೆ ನಿವೃತ್ತಿ ಇಲ್ಲ; ಅದು ಸಾಧ್ಯವೂ ಇಲ್ಲ ಎಂಬುದನ್ನೂ ಈಗಾಗಲೇ ಸಾಬೀತು ಪಡಿಸಲಾಗಿದೆ. ಆದರೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ದಿಸುವ ಅಭ್ಯರ್ಥಿಗಳ ಅರ್ಹತೆಯನ್ನು ಗಮನಿಸುವುದು ಬಹಳ ಮುಖ್ಯ. ಈಗಿನ ವೇಗವಾಗಿ ಓಡುವ ಯುಗದಲ್ಲಿ ೫ನೆ ತರಗತಿ ೧೦ ನೆ ತರಗತಿ ಏನೇನು ಸಾಕಾಗುವುದಿಲ್ಲ. ಕನಿಷ್ಠ ಅರ್ಹತೆ ಪದವಿಯಾದರು ಬೇಕು. ಈಗ ಬಹುಶ ಅದನ್ನು ಸ್ನಾತಕೋತ್ತರ ಅಂತ ಮಾಡಿದರೂ ಸಮಸ್ಯೆಯಾಗಲಾರದು. ಇದನ್ನೆಲ್ಲಾ ಯೋಚನೆ ಮಾಡಿದರೂ ಮತ್ತೆ ಮತ್ತೆ ನಮ gaurava yutavaada saMsattannu
ಪ್ರವೇಶಿಸುವುದು ಇಂಥವರೇ ಆಗುತ್ತಾರೆ ಎನ್ನುವುದು ಖೇದಕರ . adakkimtalU hechaagi

Monday, April 13, 2009

ಮತದಾನ ನಮ್ಮ ಹಕ್ಕು. ಅದನ್ನು ಇನ್ನೊಬ್ಬರಿಗಾಗಿ ಕಳೆದು ಕೊಳ್ಳಬೇಡಿ . ಹಕ್ಕು ಚಲಾಯಿಸಿದಷ್ಟಕ್ಕೆ ನಮ್ಮ ಕೆಲಸ ಮುಗಿದಿಲ್ಲ. ನಮ್ಮ ಹಕ್ಕಿನ ಮೂಲಕ ಅವರು ಪ್ರತಿನಿಧಿಗಳದ್ದಾರಿಂದ ಮುಂದಿನ ಐದು ವರ್ಷ ನಮ್ಮ ಸಮಸ್ಯೆಗಳನ್ನು ಕೇಳುವ ಮನೋಭಾವ ಅವರಲ್ಲಿರಬೇಕು. ನಾವು ಕೂಡಾ ಮತದಾನ ಮಾಡಿದ್ದನ್ನು ಮರೆಯಬಾರದು. ಪ್ರಜಾ ಪ್ರಭುತ್ವದಲ್ಲಿ ನಮಗೆ ಯಾವತ್ತು ಹಕ್ಕಿದೆ ಎಂಬ ಅಂಶ ನಮಗೆ ಗೊತ್ತಿರಬೇಕು. ಮಾನವ ಸಂಪನ್ಮೂಲದಲ್ಲಿ ನಾವು ವಿಶ್ವದಲ್ಲೇ ಹೆಸರು ಗಳಿಸುತ್ತಿದ್ದೇವೆ. ಅದರ ಮಹತ್ತನ್ನು ಉಳಿಸಿ ವಿಶ್ವಕ್ಕೆ ನಾಯಕನಾಗಲು ಮುನ್ನಡೆಯಬೇಕಾಗಿದೆ. ಇದಕ್ಕೆ ನಮ್ಮ ಮತದಾನ ಕೂಡಾ ಬಹಳ ಅಗತ್ಯವಾಗಿರುತ್ತದೆ.

ಕೇವಲ ಪಕ್ಷ ಮಾತ್ರಾ ಮುಖ್ಯವಲ್ಲ. ಅಲ್ಲಿ ಕಣದಲ್ಲಿರುವ ಅಭ್ಯರ್ಥಿ ಮುಖ್ಯನಾಗುತ್ತಾನೆ. ಯಾಕೆಂದರೆ ಪಕ್ಷದಿಂದ ಮಾತ್ರಾ ವಿಕಾಸ ಸಾಧ್ಯವಿಲ್ಲ. ಅಲ್ಲಿರುವ ನಾಗರೀಕರು ಕೂಡ ಮುಖ್ಯರಾಗುತ್ತಾರೆ. ನಮಗೆ ಯಾವ ರೀತಿಯ ಬೆಳವಣಿಗೆ ಬೇಕೆಂಬುದನ್ನು ನಾವೇ ತಿರ್ಮಾನಿಸಬೇಕಾಗಿರುವುದರಿಂದ ನಮ್ಮ ಅಗತ್ಯ ಯಾವತ್ತು ಇರುತ್ತದೆ.

ವಿದ್ಯಾವಂತರು ಸಮಾಜ ಜೀವಿಗಳು ಈ ಕುರಿತು ಗಂಭೀರ ಯೋಚನೆ ಮಾಡಬೇಕು. ಯಾವುಇದೆ ಅರ್ಹತೆಯಿಲ್ಲದೆ ಹಣ ಬಲದಿಂದ ಸ್ಥಾನ ಗಳಿಸುವ ಎಲ್ಲರನ್ನು ನಾವು ಒಗ್ಗಟ್ಟಿನಿಂದ ದೂರ ಸರಿಸಬೇಕಾಗಿದೆ.

ಎಂಥವರನ್ನು ಆರಿಸಬೇಕೆನ್ಬುದನ್ನು ನಾವು ತಿರ್ಮಾನಿಸದೆ ಹೋದರೆ ಅದರ ಫಲವನ್ನು ಅನುಭವಿಸಬೇಕಾದವರು ನಾವು ಮಾತ್ರವಲ್ಲ ಬದಲಾಗಿ ನಮ್ಮ ಪರಂಪರೆ ಆಗಿರುತ್ತದೆ.

ನಮ್ಮ ಮಕ್ಕಳಿಗಾಗಿ ಅವರ ಉತ್ತಮ ಭವಿಷ್ಯಕ್ಕಾಗಿ ನಾವು ಎಷ್ಟೋ ಕಷ್ಟ ಪಡುತ್ತಿದ್ದೇವೆ ಇದು ಕೂಡಾ ಹಾಗೆಯೇ.